ಓದು ಬಜಾರ್

ಓದಿ ಇಲ್ಲಾ ಓಡಿ…

‘ಪುಸ್ತಕವೆಂದರೆ ಪುಸ್ತಕವಲ್ಲ, ಅರಿವಿನ ಗೂಡು…’

chinthanaa3

‘ಚಿಂತನ’ ಪುಸ್ತಕ ಲೋಕದಲ್ಲೊಂದು ವಿಶಿಷ್ಟ ಹೆಸರು. ಪುಸ್ತಕಕ್ಕಾಗಿ ಪುಸ್ತಕ ಎನ್ನುವ ಸಂಸ್ಥೆ ಇದಲ್ಲ. ‘ಪುಸ್ತಕವೆಂದರೆ ಪುಸ್ತಕವಲ್ಲ, ಅರಿವಿನ ಗೂಡು…’ ಎಂಬ ಗೀತೆಯಂತೆ ಪುಸ್ತಕ ನಮ್ಮೊಳಗಿನ ಬದಲಾವಣೆಗೆ ತುಡಿಯಬೇಕು ಎಂಬ ಹಂಬಲವುಳ್ಳದ್ದು. ಈಗಾಗಲೇ ಪುಸ್ತಕ ಪ್ರೀತಿ ಬ್ಲಾಗ್ ನೀವೆಲ್ಲಾ ಓದುತ್ತಲೇ ಬಂದಿದ್ದೀರಿ. ಆ ಸಾಲಿಗೆ ಅದೇ ಬಳಗ ಸೇರಿಸುತ್ತಿರುವ ಇನ್ನೊಂದು ಕೊಂಡಿ ಚಿಂತನ ಪುಸ್ತಕ. ಹಲವು ಗಮನಿಸಬೇಕಾದ ಪುಸ್ತಕಗಳು ಈಗ ಪ್ರಕಟಣೆಯ ಹಂತದಲ್ಲಿದೆ.

ತಮ್ಮ ಬ್ಲಾಗ್ ಅನ್ನು ಚಿಂತನ ಪರಿಚಯಿಸಿಕೊಳ್ಳುವುದು ಹೀಗೆ-

ನಾವು ಹಲವು ವರ್ಷಗಳಿಂದ ಉತ್ತಮ ಅಭಿರುಚಿಯಜನಪರ-ಪ್ರಗತಿಪರ ಆಶಯ ಮತ್ತು ಮೌಲ್ಯಗಳನ್ನು ಬಿಂಬಿಸುವ ಪುಸ್ತಕಗಳ ಪ್ರಕಾಶನದಲ್ಲಿ ತೊಡಗಿದ್ದೇವೆ. ಇದಕ್ಕಾಗಿ ಚಿಂತನ‘ ಎಂಬ ಸಂಸ್ಥೆ ಸ್ಥಾಪಿಸಿ ಕೆಲಸ ಮಾಡುತ್ತಿದ್ದೇವೆ. ಅದನ್ನು ದೊಡ್ಡ ಪ್ರಮಾಣದಲ್ಲಿ ಪ್ರಬಲವಾದ ಸಂಸ್ಥೆಯಾಗಿ ಬೆಳೆಸಿ ಜನಪರ-ಪ್ರಗತಿಪರ ಕೃತಿಗಳ ರಚನೆ-ಪ್ರಕಾಶನಮತ್ತು ಕರ್ನಾಟಕದ  ಸಾಂಸ್ಕೃತಿಕ ಲೋಕದ ಆರೋಗ್ಯಕರ ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸುವ ಕನಸು ಕಾಣುತ್ತಾ ಬಂದಿದ್ದೇವೆ. ಆ ಹಾದಿಯಲ್ಲಿ ಬರುವ ಅಡಚಣೆಗಳನ್ನು ನಿವಾರಿಸಿಕನಸನ್ನು ನನಸು ಮಾಡಲು ಭರದ ಸಿಧ್ಧತೆ ನಡೆಸುತ್ತಿದ್ಧೇವೆ. ಈ ನಡುವೆ ಕರ್ನಾಟಕದ ಸಾಂಸ್ಕೃತಿಕ ಲೋಕದ ಹರವು ಮತ್ತು ಸವಾಲುಗಳು ಇನ್ನಷ್ಟು ಹೆಚ್ಚಿವೆ.

1. ಕರ್ನಾಟಕದ  ಬದುಕಿನಲ್ಲಿ ಜನ-ಪರಪ್ರಗತಿಪರ ಮೌಲ್ಯಗಳನ್ನು ಎತ್ತಿ ಹಿಡಿಯುವ ಉತ್ತಮ ಅಭಿರುಚಿಯ ಕೃತಿಗಳ ರಚನೆ,ಪ್ರಕಟಣೆ ಹಾಗೂ ಪ್ರಸಾರಕ್ಕೆ ಶ್ರಮಿಸುವುದು.

2. ಕನ್ನಡ ಪುಸ್ತಕ ಪ್ರಕಾಶನ ಲೋಕವನ್ನು ಪುಸ್ತಕಗಳ ವಿಷಯಶೈಲಿಮುದ್ರಣವಿನ್ಯಾಸಗಳಲ್ಲಿ ಇನ್ನಷ್ಟು ಹೊಸಸಾಮಯಿಕ ಮತ್ತು ಸೃಜನಶೀಲ ಬಳವಣಿಗೆಗಳಿಂದ ಶ್ರೀಮಂತಗೊಳಿಸುವುದು

3. ಕನ್ನಡದ ಎಲ್ಲಾ ಪ್ರಕಾರಗಳಲ್ಲಿ ಕೃತಿಗಳ ರಚನೆಯಲ್ಲಿ ತೊಡಗಿರುವ ಉದಯಮಾನ ಮತ್ತು ಪ್ರಭುದ್ದ ಲೇಖಕರನ್ನು ಪ್ರೋತ್ಸಾಹಿಸಿ ಅವರ ಕೃತಿಗಳು ಜನತೆಯನ್ನು ತಲುಪುವಂತೆ ಎಲ್ಲಾ ಪ್ರಯತ್ನಗಳನ್ನು ಮಾಡುವುದು

4. ಕನರ್ಾಟಕದಲ್ಲಿ ವೈಜ್ಞಾನಿಕ ಮನೋಭಾವ ಮತ್ತು ವೈಚಾರಿಕತೆ ಬೆಳೆಸುವ ಕೃತಿಗಳ ರಚನೆಪ್ರಕಟಣೆ ಹಾಗೂ ಪ್ರಸಾರಕ್ಕೆ ಶ್ರಮಿಸುವುದು.

ಇವೇ ಮುಂತಾದವುಗಳನ್ನು ಗುರಿಯಾಗಿಸಿಕೊಂಡು ಹೊರಟ ನಮ್ಮ ಹಾದಿ ಹೆಜ್ಜೆಗಳನ್ನು ದಾಖಲಿಸಲು ಈ ಬ್ಲಾಗ್ ಪ್ರಯತ್ನಿಸುತ್ತದೆ.

 

January 17, 2009 - Posted by odubazar | ಬುಕ್ ಬಜಾರ್ | | No Comments Yet

No comments yet.

Leave a comment