ಓದು ಬಜಾರ್

ಓದಿ ಇಲ್ಲಾ ಓಡಿ…

ಬೆಳಕಿನ ಬೆನ್ನು ಹತ್ತಿದ ಕಾವ್ಯ

 

 

belakina belakina-back0001

ಇಂದಿನ ಜಗತ್ತಿಗೆ ಕಾವ್ಯದ ಅಗತ್ಯವಿಲ್ಲವೆಂದು ಮೇಲ್ನೋಟಕ್ಕೆ ತೋರುತ್ತದೆ. ಸಂಸೃತಿಯ ಬಗ್ಗೆ ಯಾವುದೇ ತಿಳುವಳಿಕೆಯಿಲ್ಲದೆಆಥರ್ಿಕ ಅಭಿವೃದ್ಧಿಯೊಂದನ್ನೇ ಗುರಿಯಾಗಿರಿಸಿಕೊಂಡುಬೆಳೆಯುತ್ತಿರುವ ಜಗತ್ತಿಗೆ ಕಾವ್ಯದ ಮಾರ್ದವತೆಯಿಂದ ಗದ್ಯದ ವೈಚಾರಿಕತೆಯೇ ಹೆಚ್ಚು ಇಷ್ಟ. ದೆಹಲಿಯಲ್ಲಿ ಓಡಾಡುತ್ತಿರುವ ನನಗೆ ಗದ್ಯ ಓದುವ ಜನ ಆಗಾಗ ಕಣ್ಣಿಗೆ ಬೀಳುತ್ತಾರೆ. ಆದರೆ ಪದ್ಯ ಓದುವವರನ್ನು ನಾನು ಎಲ್ಲಿಯೂ ಕಂಡಿಲ್ಲ.

 ಹೀಗಿದ್ದರೂ ಅಲ್ಲಿ ಇಲ್ಲಿ ನಡೆಯುವ ಕವಿ ಸಮ್ಮೇಳನಗಳಲ್ಲಿ ನಿರೀಕ್ಷೆಗೂ ಮೀರಿ ಜನ ಸೇರುತ್ತಾರೆ. ದೂರದರ್ಶನಗಳಲ್ಲಿ ಓದಲಾಗುವ ಕವಿತೆಗಳನ್ನು ಕೇಳಲು-ನೋಡಲು ಮನೆಮಂದಿಯೆಲ್ಲಾ ಹಾತೊರೆಯುತ್ತಿರುತ್ತಾರೆ. ಕವಿಗೆ ಸಿಗುವ ಸ್ಥಾನಮಾನ ಗದ್ಯ ಬರಹಗಾರನಿಗೆ ದೊರೆಯುತ್ತಿಲ್ಲ. ಹೀಗಾಗಿ ಗದ್ಯ ಬರಹಗಾರರೂ ಕೂಡಾ ಒಂದೆರಡು ಕವನ ಬರೆದೇ ಬರೆಯುತ್ತಾರೆ. ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ದುಡಿಯುತ್ತಿರುವ ಆಧುನಿಕ ತಂತ್ರಜ್ಞಾನಿಗಳು ಕೂಡಾ ಆಗೀಗ ಕವನ ಬರೆಯುವ ಪದ್ಧತಿಗೆ ಬಲಿಯಾಗಿದ್ದಾರೆ. ಕವನಗಳು ಎಷ್ಟೇ ಕೆಟ್ಟವಿರಲಿ, ಅವನ್ನು ಬರೆಯುವವರೂ ಇದ್ದಾರೆ, ಖಾಸಗಿಯಾಗಿ ಓದುವವರೂ ಇದ್ದಾರೆ. ಈ ಚೋದ್ಯವು ಕಾವ್ಯವು ಆಧುನಿಕ ಜಗತ್ತಿಗೆ ಅಗತ್ಯ ಎಂಬ ಸತ್ಯವನ್ನು ಸಾರಿ ಹೇಳುತ್ತಿದೆ…..

-ಡಾ ಪುರುಷೋತ್ತಮ ಬಿಳಿಮಲೆ

ಮುನ್ನುಡಿಯ ಆರಂಭದ ಭಾಗ 

April 2, 2009 - Posted by odubazar | ಬುಕ್ ಬಜಾರ್ | | No Comments Yet

No comments yet.

Leave a comment