ಧರ್ಮದ ಸೆಂಟ್ರಲ್ ಜೈಲು…
ಕೋಮು ಗಲಭೆಗಳು ಹಾಗೂ ಭಾರತದ ಪೊಲೀಸರು
ವಿಭೂತಿ ನಾರಾಯಣ ರಾಯ್
ಅನುವಾದ: ಹಸನ್ ನಯೀಂ ಸುರಕೋಡ
ಲೋಹಿಯಾ ಪ್ರಕಾಶನ
ಕ್ಷಿತಿಜ, ಕಪ್ಪಗಲ್ಲು ರಸ್ತೆ
ಬಳ್ಳಾರಿ- ೫೮೩ ೧೦೩
ದೂರವಾಣಿ: ೦೮೩೯೨-೨೫೭೪೧೨
ಪುಟ ೧೦೪ ಬೆಲೆ ೫೦
-ಹಸನ್ ನಯೀಂ ಸುರಕೋಡ

ಸ್ವಾಮಿ ನಿಷ್ಠೆಗೆ ಹೆಸರಾಗಿದ್ದ ತಮ್ಮ ಪೊಲೀಸ್ ಪಡೆಯ ಮೂಲಕ ಬ್ರಿಟಿಷ್ ದೊರೆಗಳು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವಲ್ಲಿ ಅಷ್ಟೇನೂ ಸಫಲರಾಗಲಿಲ್ಲ. ಜೈಲಿಗೆ ಹೋಗುವುದು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವಲ್ಲಿ ಅಷ್ಟೇನೂ ಸಫಲರಾಗಲಿಲ್ಲ. ಜೈಲಿಗೆ ಹೋಗುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಹೆಮ್ಮೆಯ ವಿಷಯವೆನಿಸಿತು. ಅವರು ಬ್ರಿಟಿಷರ ದೌರ್ಜನ್ಯಕ್ಕೆ ಮಣಿಯದಾದರು. ಆಗ ಭಾರತೀಯರಿಗೆ ಮೂಲ ಗುಣ ಹಾಗೂ ಭಾರತೀಯ ಸಮಾಜದ ಒಳ ಸೆಳೆತಗಳು ಬ್ರಿಟಿಷರ ಅರಿವಿಗೆ ಬಂದವು. ಇಲ್ಲಿ ಜಾತಿಯ ಜೈಲಿನಲ್ಲೇ ಕಣ್ತೆರೆದು ತಮ್ಮ ಪಾಲಿಗೆ ದಕ್ಕಿದ ಬದುಕನ್ನು ಎದುರಾಡದೇ ಸ್ವೀಕರಿಸಿ ಅದೇ ಜೈಲಿನಲ್ಲಿ ಕಣ್ತೆರೆದು ತಮ್ಮ ಪಾಲಿಗೆ ದಕ್ಕಿದ ಬದುಕನ್ನು ಎದುರಾಡದೇ ಸ್ವೀಕರಿಸಿ ಅದೇ ಜೈಲಿನಲ್ಲಿ ಕಣ್ಣು ಮುಚ್ಚುವ ಭಾರತೀಯರಿಗಾಗಿ ಧರ್ಮದ ಸೆಂಟ್ರಲ್ ಜೈಲುಗಳನ್ನು ನಿರ್ಮಿಸಿದರು. ಹೀಗೆ ದೇಶವನ್ನು ಒಡೆದು ಆಳುವುದಕ್ಕೆ ಈ ಅಮೂರ್ತ ಜೈಲುಗಳಿಗಿಂತ ಮಿಗಿಲಾದ ಮಾರ್ಗೊಪಾಯವಿಲ್ಲ ಎಂದು ಅವರಿಗೆ ಖಾತ್ರಿಯಾಯಿತು.
ಬ್ರಿಟಿಷರೇನೊ ಭಾರತ ಬಿಟ್ಟು ತೊಲಗಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯ ಸಿಕ್ಕಿದ್ದು ಸಂಭ್ರಮದ ಸಂಗತಿಯಾಗಬೇಕಿತು. ಆದರೆ ದೇಶ ಒಡೆದದ್ದು ಅತ್ಯಂತ ನೋವಿನ ಪ್ರಸಂಗವಾಗಿ ಪರಿಣಮಿಸಿತು. ಶತ ಶತಮಾನಗಳಿಂದ ಕೂಡಿ ಬದುಕಿದ್ದ ಭಾರತೀಯರಿಗೆ ಧರ್ಮದ ಸೆಂಟ್ರಲ್ ಜೈಲುಗಳನ್ನು ನಿರ್ಮಿಸಿದರು. ಹೀಗೆ ದೇಶವನ್ನು ಒಡೆದು ಆಳುವುದಕ್ಕೆ ಈ ಅಮೂರ್ತ ಜೈಲುಗಳಿಗಿಂತ ಮಿಗಿಲಾದ ಮಾರ್ಗೊಪಾಯವಿಲ್ಲ ಎಂದು ಅವರಿಗೆ ಖಾತ್ರಿಯಾಯಿತು.
ಬ್ರಿಟಿಷರೇನೊ ಭಾರತ ಬಿಟ್ಟು ತೊಲಗಿದರು. ದೇಶ ಒಡೆದದ್ದು ಅತ್ಯಂತ ನೋವಿನ ಪ್ರಸಂಗವಾಗಿ ಪರಿಣಮಿಸಿತು. ಶತ ಶತಮಾನಗಳಿಂದ ಕೂಡಿ ಬದುಕಿದ್ದ ಭಾರತೀಯರ ಮನಸ್ಸುಗಳು ಒಡೆದಿದ್ದವು. ಇದಕ್ಕೆ ಬ್ರಿಟಿಷರ ಕುತಂತ್ರವೂ ಕಾರಣವಾಗಿತ್ತು. ಜೊತೆಗೆ ಅದೊಂದು ಸ್ವಯಂಕೃತ ಅಪರಾಧವೂ ಅಗಿತ್ತು. ಒಡೆದ ಮನಸ್ಸುಗಳನ್ನು ಬೆಸೆಯುವ ನಿಟ್ಟಿನಲ್ಲಿ ಸರಕಾರವಾಗಲೀ ರಾಜಕಾರಣಿಗಳಾಗಲೀ ಪ್ರಾಮಾಣಿಕವಾಗಿ ಪ್ರಯತ್ನಿಸಲೇ ಇಲ್ಲ. ಆ ಕಾರಣದಿಂದಾಗಿ ಸ್ವತಂತ್ರ ಭಾರತದಲ್ಲಿ ಕೋಮುಗಲಭೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವುದಿಲ್ಲ ಎನ್ನುವುದು ಖೇದದ ಸಂಗತಿಯಾಗಿದೆ. ಬೇರೆ ಮಾತಿನಲ್ಲಿ ಹೇಳಬೇಕೆಂದರೆ ಪೊಲೀಸರು ತಮ್ಮ ಹೊಸ ಒಡೆಯರ ಇಂಗಿತವನ್ನರಿತು ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಆತಂಕದ ವಿಷಯವಾಗಿದೆ.
ಖ್ಯಾತ ಪತ್ರಕರ್ತ ದಿನೇಶ್ ಅಮೀನ ಮಟ್ಟು ಅವರ ಪ್ರಕಾರ, ” ಪೊಲೀಸ್ ಇಲಾಖೆಯ ಈ ದುಸ್ಥಿತಿಗೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದವರು ರಾಜಕಾರಣಿಗಳು. ನೇಮಕಾತಿಯಿಂದ ವರ್ಗಾವಣೆವರೆಗೆ ಎಲ್ಲ ಅಧಿಕಾರಿಗಳನ್ನು ಕೈಯಲ್ಲಿಟ್ಟುಕೊಂಡಿರುವ ಈ ಒಡೆಯರ ‘ಬಂಧನ’ದಲ್ಲಿರುವ ಪೊಲೀಸರನ್ನು ಮುವತ್ತು ವರ್ಷಗಳ ಹಿಂದೆಯೇ ಬಿಡುಗಡೆಗೊಳಿಸುವ ಪ್ರಯತ್ನ ನಡೆಯಿತು. ಅದರ ಅಂಗವಾಗಿಯೇ ನೇಮಕಗೊಂಡದ್ದು ಧರ್ಮವೀರ ಅಧ್ಯಕ್ಷತೆಯ ‘ರಾಷ್ಟ್ರೀಯ ಪೊಲೀಸ್ ಆಯೋಗ’. ಇದಕ್ಕೆ ಪ್ರೇರಣೆ ತುರ್ತು ಪರಿಸ್ಥಿತಿ ಕಾಲಲ್ಲಿ ಇಂದಿರಾಗಾಂಧಿ ನಡೆಸಿದ ಪೊಲೀಸರ ದುರ್ಬಳಕೆ . ಆದರೆ 1979-1981ರ ಅವಧಿಯಲ್ಲಿ ಆಯೋಗ ನೀಡಿದ ಮೂರು ಸಂಪುಟಗಳ ವರದಿಯನ್ನು ಇಂದಿರಾಗಾಂಧಿ ಮಾತ್ರವಲ್ಲ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರಕಾರಗಳು ಕೂಡ ಜಾರಿಗೊಳಿಸುವ ಇಚ್ಛಾಶಕ್ತಿಯನ್ನು ತೋರಿಸಲಿಲ್ಲ. ಇದರ ಬದಲಿಗೆ ಇನ್ನಷ್ಟು ಸಮಿತಿಗಳನ್ನು ನೇಮಿಸಿ ಗೊಂದಲ ನಿರ್ಮಿಸುವ ಪ್ರಯತ್ನ ನಡೆದವು. ಕೊನೆಗೂ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿ ಪೊಲೀಸ್ ಸುಧಾರಣೆಯ ಶಿಫಾರಸ್ಸುಗಳನ್ನು ಜಾರಿಗೊಳಿಸುವಂತೆ ಆದೇಶ ನೀಡಿತು. ಇದರಲ್ಲಿರುವುದು ನೇಮಕಾತಿ, ವರ್ಗಾವಣೆ ಮತ್ತು ಒತ್ತಡ ರಹಿತ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಸುಧಾರಣೆಗಳ ಕ್ರಮಗಳಷ್ಟೇ…. ಪೊಲೀಸರನ್ನು ರಾಜಕೀಯದ ಜೈಲಿನಿಂದ ಬಿಡುಗಡೆಗೊಳಿಸುವುದು ಸುಲಭದ ಕೆಲಸವಲ್ಲ.”
ನಮ್ಮದು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ. ಆದರೆ ಇಲ್ಲಿ ಒಬ್ಬ ರಾಜಕಾರಣಿ ಅಷ್ಟೇ ದೊಡ್ಡ ಸರ್ವಾಧಿಕಾರಿಯಾಗಿ ಮೆರೆಯಬಲ್ಲನು. ನಮ್ಮದು ನಾಗರಿಕ ಸಮಾಜ. ಆದರೆ ಇಲ್ಲಿ ನಾಗರಿಕರೆನಿಸಿಕೊಂಡವರು ಕ್ರೂರ ಮೃಗಗಳಾಗಬಲ್ಲರು. ಕೋಮು ದಳ್ಳುರಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು ಹಾಗೂ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಪೊಲೀಸರನ್ನು ಕಂಡು ಕೆಂಡಮಂಡಲವಾಗುತ್ತಿರುವವರಲ್ಲಿ ಹಿರಿಯ ಮಾಜಿ ಪೊಲೀಸ್ ಅಧಿಕಾರಿ, ಸಾಹಿತಿ ಹಾಗೂ ಎಲ್ಲಕ್ಕೂ ಹೆಚ್ಚಾಗಿ ಸಾಮಾಜಿಕ ಕಾಳಜಿಯ ಅಪ್ಪಟ ಮಾನವಪ್ರೇಮಿ ವಿಭೂತಿ ನಾರಾಯಣರಾಯ್ ಅವರೂ ಒಬ್ಬರಾಗಿದ್ದಾರೆ. ಅವರ ಪ್ರಕಾರ ಪೊಲೀಸರನ್ನು ಜಾತಿ, ಧರ್ಮದ ಜೈಲಿನಿಂದ ಬಿಡುಗಡೆಗೊಳಿಸುವುದು ಕಷ್ಟ ಸಾಧ್ಯವಾದ ಕೆಲಸ.
ಪೊಲೀಸ್ ಹಾಗೂ ಸೇನೆರಹಿತ ಜಗತ್ತಿನ ಕನಸು ಕಂಡಿದ್ದ ಡಾ. ರಾಮ ಮನೋಹರ ಲೋಹಿಯಾ ಸ್ವತಂತ್ರ ಭಾರತದಲ್ಲೂ ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ನಿರಂತರ ಹೋರಾಟ ಮಾಡಿದರು. ಬ್ರಿಟಿಷ್ ಸರಕಾರಕ್ಕಿಂತ ನಮ್ಮ ಸರಕಾರವೇ ಅವರನ್ನು ಹೆಚ್ಚು ಸಲ ಜೈಲಿಗಟ್ಟಿತು. ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ನಿರಂತರ ಹೋರಾಟ ಮಾಡಿದರು. ಬ್ರಿಟಿಷ್ ಸರ್ಕಾರಕ್ಕಿಂತ ನಮ್ಮ ಸರ್ಕಾರವೇ ಅವರನ್ನು ಹೆಚ್ಚು ಸಲ ಜೈಲಿಗಟ್ಟಿತು. ಒಡೆದ ದೇಶವನ್ನು ಹಾಗೂ ಒಡೆದ ಮನಸ್ಸುಗಳನ್ನು ಬೆಸೆಯಲು ಜೀವನದುದ್ದಕ್ಕೂ ಶ್ರಮಿಸಿದ ಲೋಹಿಯಾರ ಕನಸು ನನಸಾಗುವಂಥದ್ದಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳುವವರು ಕೋಮು ದಳ್ಳುರಿಯನ್ನು ಹೊತ್ತಿರುವವರಿಗಿಂತ ಹೆಚ್ಚು ಬೇಜವಾಬ್ದಾರಾಗುತ್ತಾರೆ.
ಪೋಲಿಸ್ ಪಡೆಯೆಂದರೆ ರಕ್ಕಸರ ಪಡೆಯಲ್ಲ. ಅಲ್ಲಿ ಕೂಡ ಪ್ರಜ್ಞಾವಂತರೂ ಮಾನವ ಪ್ರೇಮಿಗಳೂ ಇದ್ದಾರೆ ಎನ್ನುವುದನ್ನು ವಿಭೂತಿ ನಾರಾಯಣರಾಯ್ ಅಂಥವರು ಸಾಕ್ಷಿಯಾಗಿದ್ದಾರೆ. ನಾನು ಅವರ ಜೊತೆಗೆ ಮಾತಾಡುತ್ತಿದ್ದಾಗ ಒಬ್ಬ ಮಾಜಿ ಪೊಲೀಸ್ ಅಧಿಕಾರಿ ಜೊತೆ ಮಾತಾಡುತ್ತಿದ್ದೇನೆ ಎಂದು ನನಗೆ ಅನ್ನಿಸಲೇ ಇಲ್ಲ. ಅವರ ‘ಸಾಂಪ್ರದಾಯಿಕ’ ದಂಗೆ ಔರ್ ಭಾರತೀಯ ಪೊಲೀಸ್’ ಪುಸ್ತಕವನ್ನು ಅನುವಾದಿಸಲು ಅವರ ಅನುಮತಿ ಕೋರಿದಾಗ ಅವರು, “ಮೊದಲು, ‘ರಸೀದಿ ತಿಕೇಟು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದಕ್ಕೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಸಾಮಾಜಿಕ ಕಾಳಜಿಯ ನಿಮ್ಮ ಪ್ರಕಾಶಕರಿಗೂ ಅಭಿನಂದನೆ’ ಎಂದರು.
ಕೋಮು ದಳ್ಳುರಿಗೆ ಬಲಿಯಾದ ಅಸಂಖ್ಯಾತ ಅಮಾಯಕರಿಗೆ ಈ ಕೃತಿಯನ್ನು ಗೌರವಾದರಗಳೊಂದಿಗೆ ಅರ್ಪಿಸಿದ್ದೇನೆ.
No comments yet.
Leave a comment
-
Archives
- November 2009 (6)
- October 2009 (2)
- September 2009 (1)
- July 2009 (1)
- June 2009 (1)
- May 2009 (1)
- April 2009 (4)
- March 2009 (10)
- February 2009 (13)
- January 2009 (9)
- December 2008 (7)
- November 2008 (17)
-
Categories
-
RSS
Entries RSS
Comments RSS
