ಬದುಕು ಬದಲಿಸಿದ… ಕನ್ನಡ ಮನಸ್ಸು…

ಬದುಕು ಬದಲಿಸಿದ ಹಳೇ ಸ್ಕೂಟರ್
ಗಣೇಶ ಅಮೀನಗಡ
ಕರಾವಳಿ ನುಡಿಚಿತ್ರಗಳು
ಪ್ರಕಾಶಕರು:ಕನ್ನಡ ಸಂಘ ಕಾಂತಾವರ(ರಿ),
ಕಾಂತಾವರ-574129,
ಕಾರ್ಕಳ,ಉಡುಪಿ.
ಪತ್ರಿಕಾ ಬರಹಗಳಲ್ಲಿ ಇರಬೇಕಾದ ಕುತೂಹಲ, ವಸ್ತುವಿಗೆ ಒದಗಿಸಬೇಕಾದ ನ್ಯಾಯ, ಒಟ್ಟೂ ಸಂದರ್ಭದಲ್ಲಿ ಅದಕ್ಕೆ ಇರಬೇಕಾದ ವೈಶಿಷ್ಟ್ಯ ಕೊನೆಗೆ ಅದು ತೆರೆದುಕೊಡಬಹುದಾದ ಒಳನೋಟ ಎಲ್ಲವೂ ಇಲ್ಲಿ ಪ್ರಬಂಧ ಗುಣದಿಂದ ಮೇಳೈಸಿದ್ದರಿಂದ ಇಲ್ಲಿನ ಬರಹಗಳನ್ನು ನಾವು ಒಂದು ಒಳ್ಳೆಯ ಲಲಿತ ಪ್ರಬಂಧಗಳನ್ನು ಓದುವಷ್ಟೇ ಪ್ರೀತಿಯಿಂದ ಓದಬಹುದು.ಇವು ಸಂಜೆಯ ಸಂತೆಗೆ ನೇಯ್ದ ಮೂರು ಮೊಳದ ನೇಯ್ಗೆಯಲ್ಲ.
ಪತ್ರಿಕಾಧರ್ಮದ ಶಿಸ್ತು,ನುಡಿಗಟ್ಟು. ಸ್ಥಿತಪ್ರಜ್ಞತೆ ಎಲ್ಲಾ ಡಾ. ಅಮೀನಗಡರ ಪಳಗಿದ ಲೇಖನಿಯಲ್ಲಿ ಇರುವುದರಿಂದ ಇವುಗಳನ್ನು ಕೇವಲ ಪತ್ರಿಕಾ ಲೇಖನಗಳೆಂದು ಬದಿಗಿಡುವ ಹಾಗಿಲ್ಲ.ಖಂಡಿತವಾಗಿಯೂ ಸಾಹಿತ್ಯ ಕೃತಿಯಾಗಿ ನೀವು ಒಪ್ಪಿಕೊಳ್ಳಬೇಕಾಗಿದೆ.
ಡಾ.ನಾ.ಮೊಗಸಾಲೆ
ಹಿನ್ನುಡಿಯಿಂದ
—————————————————————————————————-

ಆಳ್ವಾಸ್ ನುಡಿಸಿರಿ ಸಮ್ಮೇಳನ 2008 ಸಮಗ್ರ ವಾಙ್ಮಯ
ಕನ್ನಡ ಮನಸ್ಸು ಶಕ್ತಿ ಮತ್ತು ವ್ಯಾಪ್ತಿ
ಪ್ರಕಾಶಕರು:ಆಳ್ವಾಸ್ ಪ್ರಕಾಶನ,
ಮುಡುಬಿದಿರೆ,ದಕ್ಷಿಣ ಕನ್ನಡ
ಯಾವ ರಾಜಕೀಯ ವಾಸನೆಯೂ ಇಲ್ಲದೆ, ಯಾವುದೇ ಬಗೆಯ ಧಾರ್ಮಿಕ ಪ್ರಭಾವಕ್ಕೂ ಒಳಗಾಗದೆ ಆದಷ್ಟು ಋಜುಮಾರ್ಗದಲ್ಲಿ ಅತ್ಯಂತ ಅಚ್ಚುಕಟ್ಟಾಗಿ ಅರ್ಥಪೂರ್ಣವಾಗಿ, ಸಮಯನಿಷ್ಟೆಯಿಂದ ಮೂರು ದಿನಗಳ ಕಾಲ ದೇಶೀಯ ಸೊಬಗಿನಿಂದ ನಡೆಯುವ ಕನ್ನಡ ನಾಡು ನುಡಿಯ ರಾಷ್ಟೀಯ ಸಮ್ಮೇಳನ ಆಳ್ವಾಸ್ ನುಡಿಸಿರಿಯ ಸಾಂಸ್ಕೃತಿಕ ಪ್ರಭಾವ ಎಂಥದೆಂಬುದು ಅನುಭವಿಸಿದಲ್ಲದೆ ಗೊತ್ತಾಗದು,
ವಿಶಾಲವಾದ ಶಕ್ತಿಶಾಲಿಯಾದ ಕನ್ನಡ ಮನಸ್ಸಿನ ಬಹುರೂಪೀ ಸಂಶೋಧನೆಯಲ್ಲಿ ತೊಡಗಿ,ಕನ್ನಡ ಭಾಷೆ,ಸಾಹಿತ್ಯ, ಕಲೆ ಹಾಗೂ ಸಂಸ್ಕೃತಿಯನ್ನು ಹೃತ್ ಪೂರ್ವಕವಾಗಿ, ಸರ್ವವ್ಯಾಪಕವಾಗಿ ಸಮನ್ವಯಿಸಿಕೊಳ್ಳುವ ಈ ಬಗೆಯ ಸಮ್ಮೇಳನ ಹೊಚ್ಚ ಹೊಸ ಆದರ್ಶವೊಂದನ್ನು ನಾಡಿನ ಜನತೆಯ ಮುಂದಿರಿಸಿದೆ.ಯುವ ಜನಾಂಗವನ್ನು ವಿದ್ಯಾರ್ಥಿ ಸಮುದಾಯವನ್ನು ಈ ಸಂಯೋಜನೆಯಲ್ಲಿ ತೊಡಗಿಸಿಕೊಂಡಿರುವುದಂತೂ ಅತ್ಯಂತ ಪ್ರಶಂಸನೀಯವಾದುದು.
ಕನ್ನಡ ನೆಲದಿಂದಲೇ ವಿಶ್ವಪ್ರಜ್ಞೆಗೆ ಸ್ಪಂದಿಸಬೇಕಾದ ಅಗತ್ಯವನ್ನು ಕಂಡು ಕಳೆದ ನಾಲ್ಕು ವರ್ಷಗಳಿಂದ ಅದನ್ನು ಯಶಸ್ವಿಯಾಗಿ ಕಾರ್ಯರೂಪದಲ್ಲಿ ತರುತ್ತಿರುವ ದೊಡ್ಡ ಮನಸಿನ ಡಾ.ಎಂ.ಮೋಹನ ಆಳ್ವಾ ಅವರನ್ನು ಹಾಗೂ ಅವರ ಬೆಂಬಲಕ್ಕೆ ನಿಂತಿರುವ ಎಲ್ಲ ಸಂಸ್ಕೃತಿಪ್ರಿಯರನ್ನು ಎಷ್ಟು ಅಭಿನಂದಿಸಿದರೂ ಸಾಲದು.
ಚೆನ್ನವೀರ ಕಣವಿ
ಹಿನ್ನುಡಿಯಿಂದ
ನಾ.ದಾಮೋದರ ಶೆಟ್ಟಿಯವರ ಭರತವಾಕ್ಯ
ಸಿರಿವರ ಪ್ರಕಾಶನದಿಂದ ಪ್ರಕಟವಾಗಿರುವ ಎರಡು ಪುಸ್ತಕಗಳು

ಜಿ.ಶಂಕರ್ ಪಿಳ್ಳೆ ಅವರ ಭರತವಾಕ್ಯ
ನಾ.ದಾಮೋದರ ಶೆಟ್ಟಿ
ನಾಟಕ ಅನುವಾದ
ಪ್ರಕಾಶಕರು:ಸಿರಿವರ ಪ್ರಕಾಶನ,ನಂ.37/ಬಿ,8ನೇ ಅಡ್ಡರಸ್ತೆ,
ಲಕ್ಷಿನಾರಾಯಣಪುರ,ಬೆಂಗಳೂರು-21.
tel: 9844109706
email: ravisirivara@gmail.com
ಮಿತ್ರರಾದ ನಾ.ದಾಮೋದರ ಶೆಟ್ಟಿಯವರು ಶಂಕರ ಪಿಳ್ಳೆಯವರ ಇಂಥ ಮುಖ್ಯ ನಾಟಕವನ್ನಿಲ್ಲಿ ಕನ್ನಡಕ್ಕೆ ಅನುವಾದಿಸಿಕೊಟ್ಟಿದ್ದಾರೆ. ಅವರು ಮಲೆಯಾಳಿ ಭಾಷೆಯ ಇನ್ನೂ ಹಲವು ಕೃತಿಗಳನ್ನು ಈಗಾಗಲೇ ಕನ್ನಡಕ್ಕೆ ಅನುವಾದಿಸಿ ಅಂಥದೊಂದು ಪರಂಪರೆಯನ್ನೇ ಬೆಳೆಸಿದವರು.ಮಾತ್ರವಲ್ಲ, ಮಲೆಯಾಳಮ್ ನಿಂದ ನೇರವಾಗಿ ಕನ್ನಡಕ್ಕೆ—ಇಂಗ್ಲಿಷ್/ಹಿಂದಿಯ ಮಧ್ಯಸ್ಥಿಕೆಯಿಲ್ಲದೆ—ಅವರ ಭಾಷಾಂತರ ಕೆಲಸ ನಡೆದಿದೆ.ಹಾಗಾಗಿ ಅವರ ಕೆಲಸಕ್ಕಿರುವ ಮಹತ್ವವನ್ನು ನಾನು ಎತ್ತಿಹೇಳಬೇಕಾದ ಅಗತ್ಯವೇನೂ ಇಲ್ಲ. ಮುಂದೆಯೂ ಇಂಥ ಅರ್ಥಪೂರ್ಣ ‘ಸಂಸ್ಕೃತಿ-ಸಂಕರ’ದ ಕೆಲಸ ದಾಮೋದರ ಶೆಟ್ಟಿಯವರ ಸೂತ್ರದಾರತ್ವದಲ್ಲಿ ಜರುಗಲಿ ಎಂದಷ್ಟೇ ಆಶಿಸಿ ಅವರ ಈ ಪುಸ್ತಕಕ್ಕೆ ಸ್ವಾಗತ ಕೋರುತ್ತೇನೆ.
ಅಕ್ಷರ ಕೆ.ವಿ.
ಹಿನ್ನುಡಿಯಿಂದ

ತಟ್ಟಿಯೊಳಗಿನ ಜೀವ
ನಾ.ದಾಮೋದರ ಶೆಟ್ಟಿ
ಕವನ ಸಂಕಲನ
ಪ್ರಕಾಶಕರು:ಸಿರಿವರ ಪ್ರಕಾಶನ
‘ತಟ್ಟಿಯೊಳಗಿನ ಜೀವ’ ಎಂಬ ಕವಿತೆಯಲ್ಲಿ ‘ವೇಷ’ ಕಳಚಿದ ಮೇಲೆ ಉಳಿಯುವುದೇನೆಂದು ಪರಿಶೀಲಿಸಿಕೊಳ್ಳುವ ಮನಸ್ಥಿತಿಯಿದೆ. ಇಲ್ಲಿಯ ನಾಯಕ ಒಬ್ಬ ಸಾಮಾನ್ಯ ಮನುಷ್ಯ. ಆದರೆ ಅವನು ‘ತಟ್ಟಿರಾಯ’ನಾದೊಡನೆ ಅವನಿಗೆ ಬೇರೆ ಗತ್ತು, ಗಾಂಭೀರ್ಯ ಬಂದುಬಿಡುತ್ತದೆ. ಅವನ ಅಸ್ಮಿತೆಯೇ ಬದಲಾಗಿ ಹೋಗುತ್ತದೆ ‘ತಟ್ಟಿರಾಣಿ’ಯ ಸ್ಥಿತಿಯೂ ಅದೇ. ಇವರ ಮೆರವಣಿಗೆಯ ವೈಭವ, ಸುತ್ತಲ ಜನರ ಬೆರಗಿನ, ಪ್ರಶಂಸನೀಯ ಪ್ರತಿಕ್ರಿಯೆ ಇವೆಲ್ಲವನ್ನೂ ಕವಿತೆಯು ಅಧಿಕೃತವಾದ ವಿವರ- ವರ್ಣನೆಗಳಲ್ಲಿ ಕಣ್ಣಿಗೆ ಕಟ್ಟುವಂತೆ ನಿರೂಪಿಸುತ್ತದೆ.
ಟಿ.ಪಿ.ಅಶೋಕ್
ಹಿನ್ನುಡಿಯಿಂದ
ಧರ್ಮದ ಸೆಂಟ್ರಲ್ ಜೈಲು…
ಕೋಮು ಗಲಭೆಗಳು ಹಾಗೂ ಭಾರತದ ಪೊಲೀಸರು
ವಿಭೂತಿ ನಾರಾಯಣ ರಾಯ್
ಅನುವಾದ: ಹಸನ್ ನಯೀಂ ಸುರಕೋಡ
ಲೋಹಿಯಾ ಪ್ರಕಾಶನ
ಕ್ಷಿತಿಜ, ಕಪ್ಪಗಲ್ಲು ರಸ್ತೆ
ಬಳ್ಳಾರಿ- ೫೮೩ ೧೦೩
ದೂರವಾಣಿ: ೦೮೩೯೨-೨೫೭೪೧೨
ಪುಟ ೧೦೪ ಬೆಲೆ ೫೦
-ಹಸನ್ ನಯೀಂ ಸುರಕೋಡ

ಸ್ವಾಮಿ ನಿಷ್ಠೆಗೆ ಹೆಸರಾಗಿದ್ದ ತಮ್ಮ ಪೊಲೀಸ್ ಪಡೆಯ ಮೂಲಕ ಬ್ರಿಟಿಷ್ ದೊರೆಗಳು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವಲ್ಲಿ ಅಷ್ಟೇನೂ ಸಫಲರಾಗಲಿಲ್ಲ. ಜೈಲಿಗೆ ಹೋಗುವುದು ಸ್ವಾತಂತ್ರ್ಯ ಹೋರಾಟವನ್ನು ಹತ್ತಿಕ್ಕುವಲ್ಲಿ ಅಷ್ಟೇನೂ ಸಫಲರಾಗಲಿಲ್ಲ. ಜೈಲಿಗೆ ಹೋಗುವುದು ಸ್ವಾತಂತ್ರ್ಯ ಹೋರಾಟಗಾರರಿಗೆ ಹೆಮ್ಮೆಯ ವಿಷಯವೆನಿಸಿತು. ಅವರು ಬ್ರಿಟಿಷರ ದೌರ್ಜನ್ಯಕ್ಕೆ ಮಣಿಯದಾದರು. ಆಗ ಭಾರತೀಯರಿಗೆ ಮೂಲ ಗುಣ ಹಾಗೂ ಭಾರತೀಯ ಸಮಾಜದ ಒಳ ಸೆಳೆತಗಳು ಬ್ರಿಟಿಷರ ಅರಿವಿಗೆ ಬಂದವು. ಇಲ್ಲಿ ಜಾತಿಯ ಜೈಲಿನಲ್ಲೇ ಕಣ್ತೆರೆದು ತಮ್ಮ ಪಾಲಿಗೆ ದಕ್ಕಿದ ಬದುಕನ್ನು ಎದುರಾಡದೇ ಸ್ವೀಕರಿಸಿ ಅದೇ ಜೈಲಿನಲ್ಲಿ ಕಣ್ತೆರೆದು ತಮ್ಮ ಪಾಲಿಗೆ ದಕ್ಕಿದ ಬದುಕನ್ನು ಎದುರಾಡದೇ ಸ್ವೀಕರಿಸಿ ಅದೇ ಜೈಲಿನಲ್ಲಿ ಕಣ್ಣು ಮುಚ್ಚುವ ಭಾರತೀಯರಿಗಾಗಿ ಧರ್ಮದ ಸೆಂಟ್ರಲ್ ಜೈಲುಗಳನ್ನು ನಿರ್ಮಿಸಿದರು. ಹೀಗೆ ದೇಶವನ್ನು ಒಡೆದು ಆಳುವುದಕ್ಕೆ ಈ ಅಮೂರ್ತ ಜೈಲುಗಳಿಗಿಂತ ಮಿಗಿಲಾದ ಮಾರ್ಗೊಪಾಯವಿಲ್ಲ ಎಂದು ಅವರಿಗೆ ಖಾತ್ರಿಯಾಯಿತು.
ಬ್ರಿಟಿಷರೇನೊ ಭಾರತ ಬಿಟ್ಟು ತೊಲಗಿದರು. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಿತು. ಸ್ವಾತಂತ್ರ್ಯ ಸಿಕ್ಕಿದ್ದು ಸಂಭ್ರಮದ ಸಂಗತಿಯಾಗಬೇಕಿತು. ಆದರೆ ದೇಶ ಒಡೆದದ್ದು ಅತ್ಯಂತ ನೋವಿನ ಪ್ರಸಂಗವಾಗಿ ಪರಿಣಮಿಸಿತು. ಶತ ಶತಮಾನಗಳಿಂದ ಕೂಡಿ ಬದುಕಿದ್ದ ಭಾರತೀಯರಿಗೆ ಧರ್ಮದ ಸೆಂಟ್ರಲ್ ಜೈಲುಗಳನ್ನು ನಿರ್ಮಿಸಿದರು. ಹೀಗೆ ದೇಶವನ್ನು ಒಡೆದು ಆಳುವುದಕ್ಕೆ ಈ ಅಮೂರ್ತ ಜೈಲುಗಳಿಗಿಂತ ಮಿಗಿಲಾದ ಮಾರ್ಗೊಪಾಯವಿಲ್ಲ ಎಂದು ಅವರಿಗೆ ಖಾತ್ರಿಯಾಯಿತು.
ಬ್ರಿಟಿಷರೇನೊ ಭಾರತ ಬಿಟ್ಟು ತೊಲಗಿದರು. ದೇಶ ಒಡೆದದ್ದು ಅತ್ಯಂತ ನೋವಿನ ಪ್ರಸಂಗವಾಗಿ ಪರಿಣಮಿಸಿತು. ಶತ ಶತಮಾನಗಳಿಂದ ಕೂಡಿ ಬದುಕಿದ್ದ ಭಾರತೀಯರ ಮನಸ್ಸುಗಳು ಒಡೆದಿದ್ದವು. ಇದಕ್ಕೆ ಬ್ರಿಟಿಷರ ಕುತಂತ್ರವೂ ಕಾರಣವಾಗಿತ್ತು. ಜೊತೆಗೆ ಅದೊಂದು ಸ್ವಯಂಕೃತ ಅಪರಾಧವೂ ಅಗಿತ್ತು. ಒಡೆದ ಮನಸ್ಸುಗಳನ್ನು ಬೆಸೆಯುವ ನಿಟ್ಟಿನಲ್ಲಿ ಸರಕಾರವಾಗಲೀ ರಾಜಕಾರಣಿಗಳಾಗಲೀ ಪ್ರಾಮಾಣಿಕವಾಗಿ ಪ್ರಯತ್ನಿಸಲೇ ಇಲ್ಲ. ಆ ಕಾರಣದಿಂದಾಗಿ ಸ್ವತಂತ್ರ ಭಾರತದಲ್ಲಿ ಕೋಮುಗಲಭೆಗಳಿಗೆ ಕೊನೆಯೇ ಇಲ್ಲದಂತಾಗಿದೆ. ಇಂಥ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಜವಾಬ್ದಾರಿ ಹೊತ್ತ ಪೊಲೀಸರು ತಮ್ಮ ಕರ್ತವ್ಯ ನಿರ್ವಹಿಸುವುದಿಲ್ಲ ಎನ್ನುವುದು ಖೇದದ ಸಂಗತಿಯಾಗಿದೆ. ಬೇರೆ ಮಾತಿನಲ್ಲಿ ಹೇಳಬೇಕೆಂದರೆ ಪೊಲೀಸರು ತಮ್ಮ ಹೊಸ ಒಡೆಯರ ಇಂಗಿತವನ್ನರಿತು ಕಾರ್ಯ ನಿರ್ವಹಿಸುತ್ತಿರುವುದು ನಿಜಕ್ಕೂ ಆತಂಕದ ವಿಷಯವಾಗಿದೆ.
ಖ್ಯಾತ ಪತ್ರಕರ್ತ ದಿನೇಶ್ ಅಮೀನ ಮಟ್ಟು ಅವರ ಪ್ರಕಾರ, ” ಪೊಲೀಸ್ ಇಲಾಖೆಯ ಈ ದುಸ್ಥಿತಿಗೆ ದೊಡ್ಡ ಪ್ರಮಾಣದ ಕೊಡುಗೆ ನೀಡಿದವರು ರಾಜಕಾರಣಿಗಳು. ನೇಮಕಾತಿಯಿಂದ ವರ್ಗಾವಣೆವರೆಗೆ ಎಲ್ಲ ಅಧಿಕಾರಿಗಳನ್ನು ಕೈಯಲ್ಲಿಟ್ಟುಕೊಂಡಿರುವ ಈ ಒಡೆಯರ ‘ಬಂಧನ’ದಲ್ಲಿರುವ ಪೊಲೀಸರನ್ನು ಮುವತ್ತು ವರ್ಷಗಳ ಹಿಂದೆಯೇ ಬಿಡುಗಡೆಗೊಳಿಸುವ ಪ್ರಯತ್ನ ನಡೆಯಿತು. ಅದರ ಅಂಗವಾಗಿಯೇ ನೇಮಕಗೊಂಡದ್ದು ಧರ್ಮವೀರ ಅಧ್ಯಕ್ಷತೆಯ ‘ರಾಷ್ಟ್ರೀಯ ಪೊಲೀಸ್ ಆಯೋಗ’. ಇದಕ್ಕೆ ಪ್ರೇರಣೆ ತುರ್ತು ಪರಿಸ್ಥಿತಿ ಕಾಲಲ್ಲಿ ಇಂದಿರಾಗಾಂಧಿ ನಡೆಸಿದ ಪೊಲೀಸರ ದುರ್ಬಳಕೆ . ಆದರೆ 1979-1981ರ ಅವಧಿಯಲ್ಲಿ ಆಯೋಗ ನೀಡಿದ ಮೂರು ಸಂಪುಟಗಳ ವರದಿಯನ್ನು ಇಂದಿರಾಗಾಂಧಿ ಮಾತ್ರವಲ್ಲ ನಂತರ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸೇತರ ಸರಕಾರಗಳು ಕೂಡ ಜಾರಿಗೊಳಿಸುವ ಇಚ್ಛಾಶಕ್ತಿಯನ್ನು ತೋರಿಸಲಿಲ್ಲ. ಇದರ ಬದಲಿಗೆ ಇನ್ನಷ್ಟು ಸಮಿತಿಗಳನ್ನು ನೇಮಿಸಿ ಗೊಂದಲ ನಿರ್ಮಿಸುವ ಪ್ರಯತ್ನ ನಡೆದವು. ಕೊನೆಗೂ ಸುಪ್ರೀಂ ಕೋರ್ಟ್ ಮಧ್ಯೆ ಪ್ರವೇಶಿಸಿ ಪೊಲೀಸ್ ಸುಧಾರಣೆಯ ಶಿಫಾರಸ್ಸುಗಳನ್ನು ಜಾರಿಗೊಳಿಸುವಂತೆ ಆದೇಶ ನೀಡಿತು. ಇದರಲ್ಲಿರುವುದು ನೇಮಕಾತಿ, ವರ್ಗಾವಣೆ ಮತ್ತು ಒತ್ತಡ ರಹಿತ ಕಾರ್ಯ ನಿರ್ವಹಣೆಗೆ ಸಂಬಂಧಿಸಿದ ಸುಧಾರಣೆಗಳ ಕ್ರಮಗಳಷ್ಟೇ…. ಪೊಲೀಸರನ್ನು ರಾಜಕೀಯದ ಜೈಲಿನಿಂದ ಬಿಡುಗಡೆಗೊಳಿಸುವುದು ಸುಲಭದ ಕೆಲಸವಲ್ಲ.”
ನಮ್ಮದು ಜಗತ್ತಿನಲ್ಲಿಯೇ ಅತಿ ದೊಡ್ಡ ಪ್ರಜಾಪ್ರಭುತ್ವ. ಆದರೆ ಇಲ್ಲಿ ಒಬ್ಬ ರಾಜಕಾರಣಿ ಅಷ್ಟೇ ದೊಡ್ಡ ಸರ್ವಾಧಿಕಾರಿಯಾಗಿ ಮೆರೆಯಬಲ್ಲನು. ನಮ್ಮದು ನಾಗರಿಕ ಸಮಾಜ. ಆದರೆ ಇಲ್ಲಿ ನಾಗರಿಕರೆನಿಸಿಕೊಂಡವರು ಕ್ರೂರ ಮೃಗಗಳಾಗಬಲ್ಲರು. ಕೋಮು ದಳ್ಳುರಿಯಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುವ ರಾಜಕಾರಣಿಗಳು ಹಾಗೂ ಅವರ ತಾಳಕ್ಕೆ ತಕ್ಕಂತೆ ಕುಣಿಯುವ ಪೊಲೀಸರನ್ನು ಕಂಡು ಕೆಂಡಮಂಡಲವಾಗುತ್ತಿರುವವರಲ್ಲಿ ಹಿರಿಯ ಮಾಜಿ ಪೊಲೀಸ್ ಅಧಿಕಾರಿ, ಸಾಹಿತಿ ಹಾಗೂ ಎಲ್ಲಕ್ಕೂ ಹೆಚ್ಚಾಗಿ ಸಾಮಾಜಿಕ ಕಾಳಜಿಯ ಅಪ್ಪಟ ಮಾನವಪ್ರೇಮಿ ವಿಭೂತಿ ನಾರಾಯಣರಾಯ್ ಅವರೂ ಒಬ್ಬರಾಗಿದ್ದಾರೆ. ಅವರ ಪ್ರಕಾರ ಪೊಲೀಸರನ್ನು ಜಾತಿ, ಧರ್ಮದ ಜೈಲಿನಿಂದ ಬಿಡುಗಡೆಗೊಳಿಸುವುದು ಕಷ್ಟ ಸಾಧ್ಯವಾದ ಕೆಲಸ.
ಪೊಲೀಸ್ ಹಾಗೂ ಸೇನೆರಹಿತ ಜಗತ್ತಿನ ಕನಸು ಕಂಡಿದ್ದ ಡಾ. ರಾಮ ಮನೋಹರ ಲೋಹಿಯಾ ಸ್ವತಂತ್ರ ಭಾರತದಲ್ಲೂ ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ನಿರಂತರ ಹೋರಾಟ ಮಾಡಿದರು. ಬ್ರಿಟಿಷ್ ಸರಕಾರಕ್ಕಿಂತ ನಮ್ಮ ಸರಕಾರವೇ ಅವರನ್ನು ಹೆಚ್ಚು ಸಲ ಜೈಲಿಗಟ್ಟಿತು. ಸ್ವಾತಂತ್ರ್ಯ ಹಾಗೂ ಸಮಾನತೆಗಾಗಿ ನಿರಂತರ ಹೋರಾಟ ಮಾಡಿದರು. ಬ್ರಿಟಿಷ್ ಸರ್ಕಾರಕ್ಕಿಂತ ನಮ್ಮ ಸರ್ಕಾರವೇ ಅವರನ್ನು ಹೆಚ್ಚು ಸಲ ಜೈಲಿಗಟ್ಟಿತು. ಒಡೆದ ದೇಶವನ್ನು ಹಾಗೂ ಒಡೆದ ಮನಸ್ಸುಗಳನ್ನು ಬೆಸೆಯಲು ಜೀವನದುದ್ದಕ್ಕೂ ಶ್ರಮಿಸಿದ ಲೋಹಿಯಾರ ಕನಸು ನನಸಾಗುವಂಥದ್ದಲ್ಲವೆಂದು ಕೈಕಟ್ಟಿ ಕುಳಿತುಕೊಳ್ಳುವವರು ಕೋಮು ದಳ್ಳುರಿಯನ್ನು ಹೊತ್ತಿರುವವರಿಗಿಂತ ಹೆಚ್ಚು ಬೇಜವಾಬ್ದಾರಾಗುತ್ತಾರೆ.
ಪೋಲಿಸ್ ಪಡೆಯೆಂದರೆ ರಕ್ಕಸರ ಪಡೆಯಲ್ಲ. ಅಲ್ಲಿ ಕೂಡ ಪ್ರಜ್ಞಾವಂತರೂ ಮಾನವ ಪ್ರೇಮಿಗಳೂ ಇದ್ದಾರೆ ಎನ್ನುವುದನ್ನು ವಿಭೂತಿ ನಾರಾಯಣರಾಯ್ ಅಂಥವರು ಸಾಕ್ಷಿಯಾಗಿದ್ದಾರೆ. ನಾನು ಅವರ ಜೊತೆಗೆ ಮಾತಾಡುತ್ತಿದ್ದಾಗ ಒಬ್ಬ ಮಾಜಿ ಪೊಲೀಸ್ ಅಧಿಕಾರಿ ಜೊತೆ ಮಾತಾಡುತ್ತಿದ್ದೇನೆ ಎಂದು ನನಗೆ ಅನ್ನಿಸಲೇ ಇಲ್ಲ. ಅವರ ‘ಸಾಂಪ್ರದಾಯಿಕ’ ದಂಗೆ ಔರ್ ಭಾರತೀಯ ಪೊಲೀಸ್’ ಪುಸ್ತಕವನ್ನು ಅನುವಾದಿಸಲು ಅವರ ಅನುಮತಿ ಕೋರಿದಾಗ ಅವರು, “ಮೊದಲು, ‘ರಸೀದಿ ತಿಕೇಟು’ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಿಕ್ಕಿದ್ದಕ್ಕೆ ನಿಮಗೆ ಹೃತ್ಪೂರ್ವಕ ಅಭಿನಂದನೆಗಳು ಹಾಗೂ ಸಾಮಾಜಿಕ ಕಾಳಜಿಯ ನಿಮ್ಮ ಪ್ರಕಾಶಕರಿಗೂ ಅಭಿನಂದನೆ’ ಎಂದರು.
ಕೋಮು ದಳ್ಳುರಿಗೆ ಬಲಿಯಾದ ಅಸಂಖ್ಯಾತ ಅಮಾಯಕರಿಗೆ ಈ ಕೃತಿಯನ್ನು ಗೌರವಾದರಗಳೊಂದಿಗೆ ಅರ್ಪಿಸಿದ್ದೇನೆ.
-
Archives
- November 2009 (6)
- October 2009 (2)
- September 2009 (1)
- July 2009 (1)
- June 2009 (1)
- May 2009 (1)
- April 2009 (4)
- March 2009 (10)
- February 2009 (13)
- January 2009 (9)
- December 2008 (7)
- November 2008 (17)
-
Categories
-
RSS
Entries RSS
Comments RSS









